ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ಉಳಿಕೆಗೆ ಹವ್ಯಾಸಿ ಕಲಾವಿದರು ಕಾರಣ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 24 , 2014
ನವ೦ಬರ್ 23, 2014

ಯಕ್ಷಗಾನ ಉಳಿಕೆಗೆ ಹವ್ಯಾಸಿ ಕಲಾವಿದರು ಕಾರಣ

ಪಡುಬಿದ್ರಿ : ಯಕ್ಷಗಾನ ಕಲೆ ಇಂದು ಉಳಿದಿದ್ದರೆ ಅದಕ್ಕೆ ಹವ್ಯಾಸಿ ಕಲಾವಿದರೆ ಕಾರಣ. ಧಾರ್ಮಿಕ ಕೇಂದ್ರಗಳ ಸಹಿತ ಕಲಾ ಪೋಷಕರ ಸಹಕಾರದಿಂದ ಹಲವು ಯಕ್ಷಗಾನ ಕಲಾವಿದರು ಬೆಳೆಯಲು ಕಾರಣವಾಗಿದೆ ಎಂದು ಹವ್ಯಾಸಿ ಯಕ್ಷಗಾನ ಕಲಾವಿದ ವೈ. ರಾಮಕಷ್ಣ ರಾವ್ ಹೇಳಿದರು.

ಅವರು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ದೀಪೋತ್ಸವದ ಪ್ರಯುಕ್ತ ಶ್ರೀ ದೇವಳದ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿ ಏರ್ಪಡಿಸಿದ್ದ 11 ಹವ್ಯಾಸಿ ಯಕ್ಷಗಾನ ಕಲಾವಿದರ ಸನ್ಮಾನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಳ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಆರ್.ನಾವಡ ಮುಖ್ಯ ಅತಿಥಿಗಳಾಗಿದ್ದರು. ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಹಾಗೂ ಕೇಶವ ಕೆ. ಅಮೀನ್ ಅಭಿನಂದನೆ ಭಾಷಣ ಮಾಡಿದರು.

ಹವ್ಯಾಸಿ ಕಲಾವಿದರಾಗಿ ಪಡುಬಿದ್ರಿಯ ಶ್ರೀ ದೇವರ ಸನ್ನಿಧಿಯಲ್ಲೇ ಕಲಾ ವ್ಯವಸಾಯವನ್ನು ಮಾಡಿರುವ ವೈ.ರಾಮಕಷ್ಣ ರಾವ್ ಸೇರಿದಂತೆ ಇನ್ನಾ ಆನಂದ ಶೆಟ್ಟಿ, ಶಾಂತಾರಾಮ್, ವೆಂಕಟರಮಣ ಜೋಗಿ, ತಾರಾನಾಥ ಭಟ್, ವೈ.ರಾಮ ಭಂಡಾರಿ, ಪಿ. ಎಸ್.ರವೀಂದ್ರ ರಾವ್, ಗಣಪತಿ ಕಾಮತ್, ಜಗದಾಭಿರಾಮ ಸ್ವಾಮಿ, ಸದಾಶಿವ ರಾವ್, ನಾಗರಾಜ ಭಟ್ ಅವರನ್ನು ದೇವಳದ ಆಡಳಿತಾಧಿಕಾರಿ ಪ್ರಶಾಂತ್‌ಕುಮಾರ್ ಶೆಟ್ಟಿ ಸನ್ಮಾನಿಸಿದರು. ವೈ.ಜಗನ್ನಾಥ ರಾವ್ ಸ್ವಾಗತಿಸಿದರು. ಯೋಗೀಶ ಆಚಾರ್ಯ ನಿರ್ವಹಿಸಿದ್ದರು. ಭಾಸ್ಕರ್ ಕೆ. ವಂದಿಸಿದರು.

ಕೃಪೆ : http://www.vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ